Thursday, December 30, 2021

Dr. S. Srikanta Sastri's Foreword to Ta. Ra. Su's "Nrupatunga"

ಮುನ್ನುಡಿ 

ಮಾನವನ ದುಃಖಪರಂಪರೆಯ ನಿವಾರಣೆಗಾಗಿ ವ್ಯವಹಾರ ಪ್ರಪಂಚದಲ್ಲಿ ಸೂಕ್ತ ಮಾರ್ಗವನ್ನು ಕಂಡುಹಿಡಿಯುವುದು ವಿಶ್ವದ ತತ್ವಾನ್ವೇಷಿಗಳ ಕರ್ತವ್ಯವಾಗಿದೆಯೆಂಬುದು ಚರಿತ್ರೆಯಿಂದ ವಿದಿತವಾಗಿದೆ. ಆಕಸ್ಮಿಕ ಘಟನೆ, ಕಾಲಯಂತ್ರ ಅಥವಾ ಯುದ್ಧದ ಮೂಲಕವಲ್ಲದೆ ಜಗತ್ತಿನಲ್ಲಿ ಶಾಂತಿಯು ನೆಲೆಸಬೇಕಾದರೆ ಒಂದೇ ಮಹಾವ್ಯಕ್ತಿಯಲ್ಲಿ ರಾಜಕೀಯ ಶಕ್ತಿಯೂ ಆತ್ಮ ಜ್ಞಾನವೂ ಸೇರಿರಬೇಕೆಂದೂ ಆತ್ಮಜ್ಞಾನಿಗಳೇ ರಾಜರಾಗಬೇಕು ಅಥವಾ ಆಡಳಿತ ನಡೆಸುವವರು ಸಂಪೂರ್ಣವಾಗಿ ತತ್ವಜ್ಞಾನ ಹೊಂದಿರಬೇಕು ಎಂದು ಪ್ಲೇಟೋ* ಅಭಿಪ್ರಾಯಪಟ್ಟನು. ಇದು ಸಾಧ್ಯವೇ, ಜಗತ್ತಿನಲ್ಲಿ ಅಂತಹ ವ್ಯಕ್ತಿಗಳು ಎಷ್ಟಿರುವರು? ತತ್ವಾನ್ವೇಷಣೆಯ ಉದ್ದೇಶ ನಿಸ್ಸಂಗತ್ವದಿಂದ ನಿರ್ಮೋಹತ್ವವನ್ನು ಸಾಧಿಸಿ ಅದರಿಂದ ನಿಶ್ಚಲತತ್ವ ಮತ್ತು ಜೀವನ್ಮುಕ್ತಿ ಪಡೆಯುವುದಿಲ್ಲವೇ? ಸಮಾಜದ ಉದ್ದಾರಕಾರ್ಯ ವ್ಯಕ್ತಿಯ ನಿಸ್ಸಂಗತ್ವಕ್ಕೆ ಕೇವಲ ವಿರುದ್ಧವಲ್ಲವೇ ಎಂದು ಪ್ರಶ್ನೆಗಳು ಏಳುವುವು. ಪ್ರಪಂಚದ ಬಂಧನದಿಂದ ತಪ್ಪಿಸಿಕೊಳ್ಳಲು ಯತ್ನಿಸಿತ್ತಿರುವವನು ತಪ್ಪು ದಾರಿ ಹಿಡಿದ ಪ್ರಪಂಚವನ್ನು ತಿದ್ದುವ ಹವ್ಯಾಸಕ್ಕೆ ಏಕೆ ಹೋಗಬೇಕು? ಒಬ್ಬ ವ್ಯಕ್ತಿಯ ಆತ್ಮ ಬಲಿದಾನದಿಂದ ಸಮಾಜವೆಲ್ಲ ಉದ್ದಾರವಾಗುವದೆಂಬ ಕೆಲವು ಮತಗಳ ...

_______

* There is no hope of a cessation of evils in the states and, in my opinion, none for mankind - except through a personal union between political power and philosophy.....The Union may be achieved in two ways, Either the philosophers must become Kings and potentates must take - genuinely and thoroughly to philosophy. 

(Plato: Republic 473. D)


To the read full Foreword, Click Here. 

No comments:

Post a Comment